ಸುಮಾರು ಎರಡು ಏಡುಗಳ ಹಿಂದೆ, ನಮಗೆ ಮದುವೆ ಮಾಡಲು ನಮ್ಮ ನಮ್ಮ ಮನೆಯವರು ಹುಡುಗಿ ನೋಡುವ ಕೆಲಸ ಮೊದಲು ಮಾಡಿದರು. ಹಳ್ಳಕ್ಕೆ ಬೀಳಲು ಸಜ್ಜಾದ ಮೊದಲ ಕುರಿ - ಸಿದ್ದು. ಬೆಂಗಳೂರು ಮತ್ತು ಬಿಜಾಪುರ ಬಾಗಗಳಲ್ಲಿ ಅವನ ಹೆತ್ತವರು ಹುಡುಗಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹೀಗೇ ಒಂದು ದಿನ ಬೆಂಗಳೂರಿನಲ್ಲಿರುವ ಹುಡುಗಿಯೊಬ್ಬಳ ಪ್ರಸ್ತಾಪ ಅವರಿಗೆ ಬಂತು. ಸಿದ್ದುನ ಅಪ್ಪ-ಅಮ್ಮ ಇದ್ದದ್ದು ಬಿಜಾಪುರಿನಲ್ಲಿ. ಅಶ್ಟು ದೂರದಿಂದ ಬಂದು ಹೋಗಬೇಕಾದ ಕಾರಣ, ನೀನೇ ಹುಡುಗಿಯ ಕೂಡ ಮಾತಾಡಿ ಬಾ ಎಂದು ಅವರು ಸಿದ್ದುಗೆ ಹೇಳಿದರು. ಹುಡುಗಿ ಬೆಂಗಳೂರಿನಲ್ಲಿ ಅವಳ ತಂದೆ ತಾಯಿಯ ಜೊತೆಗೆ ಇರುವುದಂತೆ. ಅವಳ ಅಪ್ಪ ಮನೆಗೇ ಬಂದು ನೋಡಿಕೊಂಡು ಹೋಗಿ ಅಂದರಂತೆ. ಹುಡುಗಿ ನೋಡಲು ಹೋಗುವುದೆಂದರೆ ಸುಳುವಿನ ಮಾತೆ? ಅದೂ ನಾಚಿಕೆ ಗುಣದ ಸಿದ್ದುಗೆ?
ನಮ್ಮ ಗೆಳೆಯರ ಗುಂಪಿನಲ್ಲಿ ಜೊತೆಯಾಗಿ ಒಂದಿಬ್ಬರಿಗೆ ಬಾ ಎಂದು ಕೇಳಿಕೊಂಡ. ನಮಗೆಲ್ಲರಿಗೂ ಇದೆಲ್ಲ ಹೊಸದು. ಹುಡುಗನ ಜೊತೆ ಅವನ ಗೆಳೆಯರು ಹೋಗುವುದೆಂದರೆ? ಎಲ್ಲರಿಗೂ ಇರಿಸು-ಮುರುಸು, ಅಲ್ಲವೆ? ಆದರೂ ಬೇರೆ ದಾರಿಯಿಲ್ಲದೆ ಅವನ ಜೊತೆ ಹೋಗಲು ನಾನು ಮತ್ತು ಶಿವು ಒಪ್ಪಿದೆವು. ಹುಡುಗಿಯ ತಂದೆಯ ಜೊತೆ ಮಾತಾಡಿ ಒಂದು ಬಾನುವಾರ ಬೆಳಗ್ಗೆ ಸಮಯ ಗೊತ್ತು ಮಾಡಿಯಾಯಿತು. ಹುಡುಗಿಯ ಮನೆ ಕುವೆಂಪು ನಗರದಲ್ಲಿ ಅಂತ ಸಿದ್ದು ನಮಗೆ ಹೇಳಿದ. ಸರಿ, ಆ ಬಾನುವಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ನಾವು ಹೊರಟೆವು. ಕುವೆಂಪು ನಗರ ತಲುಪಿ ಹುಡುಗಿಯ ತಂದೆಗೆ ಕರೆ ಮಾಡಿ, ಸಿದ್ದು ಮಾತಾಡಿದ:
"ನಮಸ್ಕಾರ್ರೀ. ನಾ ಸಿದ್ದು ಮಾತಾಡಾತಿನ್ರಿ."
"ನಮಸ್ಕಾರ. ಹೇಳ್ರಿ."
"ನಾವು ಕುವೆಂಪು ನಗರ bus stand ನಾಗ ಅದಿವ್ರಿ. ಇಲ್ಲಿಂದ ಹೆಂಗ್ ಬರಬೇಕ್ರೀ?"
"ಅಲ್ಲಿ bus-stop ಇಂದ ಮುಂದ ಬಂದ್ರ ಒಂದು ಕಿರಾಣಿ ಅಂಗಡಿ ಅದ ನೋಡ್ರಿ..." ಇನ್ನು ಮಾತು ಮುಗಿಸದ ಅವರನ್ನು ತಡೆದು,
"ಇಲ್ಲಿ Indian Oil ಪೆಟ್ರೊಲ್ ಬಂಕ್ ಅದ ನೋಡ್ರಿ".
"ನಮ್ ಊರಾಗ Indian Oil ಪೆಟ್ರೊಲ್ ಬಂಕೆ ಇಲ್ಲಲ್ರಿ. ನೀವು ಯಾವ್ ಕಡೆಯಿಂದ ಬಂದೀರಿ?"
"ನಾವು ಜಯನಗರ ಕಡೆಯಿಂದ ಬಂದೀವ್ರೀ".
"ಜಯನಗರ?" ಸ್ವಲ್ಪ ಗಲಿಬಿಲಿಗೊಂಡ ಅವರು, "ನಮ್ಮ್ ಮನಿ ಇರೂದು ಬಂಗಾರಪೇಟೆ ಕುವೆಂಪುನಗರನಾಗ ರೀ". ಅಂತ ವಿವರಿಸಿದರು.
"ಒಂದ್ ನಿಮಿಶ ರೀ", ಎಂದು ಸಿದ್ದು ಮಾತನಾಡುವುದು ನಿಲ್ಲಿಸಿ ನಮ್ಮ ಕಡೆ ನೋಡುತ್ತ, "ಬಂಗಾರಪೇಟ ಎಲ್ಲಿ ಬರತ್ತ ಲೇ?"
ಶಿವು, "ಬಂಗಾರಪೇಟ ಯಾಕ?" ಅಂತ ಕೇಳಿದ. ಎನೋ ಯಡವಟ್ಟಾಗಿದೆ ಅಂತ ಅವನಿಗೆ ಗೊತ್ತಾಯಿತು.
"ಇವ್ರೇನೋ ಬಂಗಾರಪೇಟ ಅನ್ನಾsತಾರ". ಸಿದ್ದು ಅಂದ.
"phone ತಾ ಇಲ್ಲೆ" ಅಂತ ಶಿವು ಪೋನು ಇಸಗೊಂಡು ಅವರೊಡನೆ ಮಾತನಾಡಿದ.
ಅವರ ಒಕ್ಕಣೆ ಪೂರ್ತಿ ಕೇಳಿ ತಿಳಿದುಕೊಂಡ. ಆಗ ಗೊತ್ತಾಗಿದ್ದು, ಹುಡುಗಿಯ ಮನೆ ಇರುವುದು ಬೆಂಗಳೂರಿನಿಂದ ಸುಮಾರು ಎಂಬತ್ತು ಕಿಲೋ ಮೀಟರ್ ದೂರದಲ್ಲಿರುವ ಬಂಗಾರಪೇಟೆಯ ಕುವೆಂಪು ನಗರದಲ್ಲಿ ಎಂದು. ಪೋನಿನ ಕರೆ ಮುಗಿಯುತ್ತಿದ್ದಂತೆಯೇ ಶಿವುನ ಸಿಟ್ಟು ಏರಿ, ಸಿದ್ದುಗೆ ಬಯ್ದಿದ್ದೇ ಬಯ್ದಿದ್ದು.
"ಒಂದ ಕೆಲಸಾ ಸರಿ ಮಾಡಾಂಗಿಲ್ಲ ನೋಡಲೇ ನೀ. ಸರಿಯಾಗಿ ಕೇಳ್ಕೊಳಾಕ್ ಬರಾಂಗಿಲ್ಲಾ? ನಮ್ sunday ಹಾಳ್ ಮಾಡಿದಿ. ನಾ ಅರಾಮ್ ಮಕ್ಕೊತಿದ್ದ್ಯಾ".
ನಾನು ಶಿವುನ ಸಮಾದಾನ ಪಡಿಸಿ, ನನಗೆ ಬಂದಿದ್ದ ಸಿಟ್ಟನ್ನೂ ಸಿದ್ದು ಮೇಲೆ ಬಯ್ದು ತೀರಿಸಿಕೊಂಡೆ.
ಸರಿ, ಈಗ ಏನು ಮಾಡುವುದು? ಬಂಗಾರಪೇಟೆಗೆ ಹೋಗಿಬರಲು ಹೆಚ್ಚು ಕಡಿಮೆ ಒಂದು ದಿನ ಬೇಕು. ಅಶ್ಟು ದೂರ ಹೋಗಿಬರಲು ನಾವು ಒಪ್ಪಲಿಲ್ಲ. ಆ ಊರು ಬೆಂಗಳೂರಿನಿಂದ ತುಂಬ ದೂರ ಇದೆಯೆಂದೂ, ಹೋಗಿ ಬರಲು ಸಮಯ ತೆಗೆದುಕೊಳ್ಳುತ್ತದೆಂದೂ, ಅಪ್ಪ-ಅಮ್ಮರಿಗೆ ಕರೆ ಮಾಡಿ ಸಿದ್ದು ತಿಳಿಸಿದ. ಆದರೆ ಅವನ ಅಮ್ಮ, ಹೇಗಿದ್ದರೂ ಬಾನುವಾರ ರಜಾ, ಹೋಗಿ ಬರಲೇಬೇಕೆಂದು ತಾಕೀತು ಮಾಡಿದರು. ನಾವು ಜೊತೆಗೆ ಬರಲು ಒಪ್ಪಲಿಲ್ಲ. ತಾಯಿಯ ಒತ್ತಾಯದಿಂದ ಮುನಿಸಿಕೊಂಡ ಸಿದ್ದು, ತಾನು ಒಬ್ಬನೇ ಹೋಗಿ ಬರುವುದಾಗಿ ಹೇಳಿದ. ಮುನಿಸಿನಿಂದ ಸಣ್ಣಗಾದ ಅವನ ಮುಕ ನೋಡಲಾಗದೆ, ಕರಾರಿನ ಮೇಲೆ ಅವನ ಜೊತೆ ಬರಲು ಒಪ್ಪಿದೆವು. ಅದೇನೆಂದರೆ, ಅಲ್ಲಿಗೆ ಹೋಗಿ ಬರಲು ಒಂದು Tata Sumo ಬಾಡಿಗೆಗೆ ಪಡೆದು, ಗಾಡಿಯ ಕರ್ಚು ಮತ್ತು ಹಾದಿಯ ಕರ್ಚು (ನಮ್ಮೆಲ್ಲರ ಚಹಾ, ಪಾನಿ, ಮುಂತಾಗಿ) ತಾನೇ ಕೊಡಬೇಕು, ಮತ್ತು ನಮ್ಮ ಗುಂಪಿನ ಇತರ ಗೆಳೆಯರನ್ನೂ ನಮ್ಮ ಜೊತೆ ಬರಲು ಒಪ್ಪಿಸಬೇಕು.
ಗಾಡಿ ಬಾಡಿಗೆ ಹೊಂದಿಸುವುದೇನು ಕಶ್ಟವಾಗಿರಲಿಲ್ಲ ಸಿದ್ದುಗೆ. ಆದರೆ, ಮಿಕ್ಕ ಗೆಳೆಯರು ಜೊತೆಗೆ ಬರಲು ಒಪ್ಪಬೇಕಲ್ಲ? ಅವರಿನ್ನೂ ಮಲಗಿದ್ದರೂ ಆಶ್ಚರ್ಯವಿಲ್ಲ. ಅವರನ್ನು ಎಬ್ಬಿಸಿ, ಒಪ್ಪಿಸಿ ಹೇಗೆ ಕರೆದುಕೊಂಡು ಹೋಗುವುದು ಎಂದು ಸಿದ್ದು ಯೋಚಿಸತೊಡಗಿದ. ಅವರನ್ನು ಒಪ್ಪಿಸಲು ನಾವು ಸಹಾಯ ಮಾಡುತ್ತೇವೆಂದು ಹೇಳಿ ಮರಳಿ ಮನೆಗೆ ಬಂದೆವು. ಮಿಕ್ಕವರು ಎದ್ದಿದ್ದರು. ನಡೆದ ಪ್ರಸಂಗವನ್ನು ನಾನು ರಸವತ್ತಾಗಿ ವಿವರಿಸಿದೆ. ಇದೇ ಅವಕಾಶ ಎಂದು, ಅವರೂ ಸಿದ್ದುಗೆ ಬಯ್ದರು. ಹೇಗಿದ್ದರೂ ಬಾನುವಾರ, ಬಂಗಾರಪೇಟೆಗೆ ಹತ್ತಿರವಿರುವ ಕೋಟಿ ಲಿಂಗ ನೋಡಿಕೊಂಡು ಬಂದರಾಯಿತೆಂದು ಎಲ್ಲರೂ ಒಪ್ಪಿದರು.
ಗೋಪಿಗೆ ಮಾತ್ರ ಯಾಕೋ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಬರಲು ತಯಾರಾದನು.
ಬಾಡಿಗೆಯ ಗಾಡಿಯೂ ಬಂತು. ಬಿಳಿಯ ಬಣ್ಣದ Toyota Qualis.
ಅದನ್ನು ನೋಡಿ ಗೋಪಿ, "ಗಾಡಿ ಬಣ್ಣ ಸರಿಯಿಲ್ಲ. ನಮಗ black color ಬೇಕು. ನಾ ಬರಾಂಗಿಲ್ಲ" ಅನ್ನಬೇಕೆ?
ಅವನ ಮಾತಿಗೆ ನಾವೆಲ್ಲ ಬಿದ್ದು ಬಿದ್ದು ನಗುತ್ತಾ ಗಾಡಿ ಹತ್ತಿದೆವು. ಸಂಜೆಯ ಹೊತ್ತಿಗೆ ಬಂಗಾರಪೇಟೆ ತಲುಪಿ, ಹುಡುಗಿಯನ್ನು ನೋಡಿಕೊಂಡು, ಕೋಟಿ ಲಿಂಗದ ದರ್ಶನವನ್ನೂ ಪಡೆದು ಮರಳಿ ಬಂದೆವು.
ನಮ್ಮ ಗೆಳೆಯರ ಗುಂಪಿನಲ್ಲಿ ಜೊತೆಯಾಗಿ ಒಂದಿಬ್ಬರಿಗೆ ಬಾ ಎಂದು ಕೇಳಿಕೊಂಡ. ನಮಗೆಲ್ಲರಿಗೂ ಇದೆಲ್ಲ ಹೊಸದು. ಹುಡುಗನ ಜೊತೆ ಅವನ ಗೆಳೆಯರು ಹೋಗುವುದೆಂದರೆ? ಎಲ್ಲರಿಗೂ ಇರಿಸು-ಮುರುಸು, ಅಲ್ಲವೆ? ಆದರೂ ಬೇರೆ ದಾರಿಯಿಲ್ಲದೆ ಅವನ ಜೊತೆ ಹೋಗಲು ನಾನು ಮತ್ತು ಶಿವು ಒಪ್ಪಿದೆವು. ಹುಡುಗಿಯ ತಂದೆಯ ಜೊತೆ ಮಾತಾಡಿ ಒಂದು ಬಾನುವಾರ ಬೆಳಗ್ಗೆ ಸಮಯ ಗೊತ್ತು ಮಾಡಿಯಾಯಿತು. ಹುಡುಗಿಯ ಮನೆ ಕುವೆಂಪು ನಗರದಲ್ಲಿ ಅಂತ ಸಿದ್ದು ನಮಗೆ ಹೇಳಿದ. ಸರಿ, ಆ ಬಾನುವಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ನಾವು ಹೊರಟೆವು. ಕುವೆಂಪು ನಗರ ತಲುಪಿ ಹುಡುಗಿಯ ತಂದೆಗೆ ಕರೆ ಮಾಡಿ, ಸಿದ್ದು ಮಾತಾಡಿದ:
"ನಮಸ್ಕಾರ. ಹೇಳ್ರಿ."
"ನಾವು ಕುವೆಂಪು ನಗರ bus stand ನಾಗ ಅದಿವ್ರಿ. ಇಲ್ಲಿಂದ ಹೆಂಗ್ ಬರಬೇಕ್ರೀ?"
"ಅಲ್ಲಿ bus-stop ಇಂದ ಮುಂದ ಬಂದ್ರ ಒಂದು ಕಿರಾಣಿ ಅಂಗಡಿ ಅದ ನೋಡ್ರಿ..." ಇನ್ನು ಮಾತು ಮುಗಿಸದ ಅವರನ್ನು ತಡೆದು,
"ಇಲ್ಲಿ Indian Oil ಪೆಟ್ರೊಲ್ ಬಂಕ್ ಅದ ನೋಡ್ರಿ".
"ನಮ್ ಊರಾಗ Indian Oil ಪೆಟ್ರೊಲ್ ಬಂಕೆ ಇಲ್ಲಲ್ರಿ. ನೀವು ಯಾವ್ ಕಡೆಯಿಂದ ಬಂದೀರಿ?"
"ನಾವು ಜಯನಗರ ಕಡೆಯಿಂದ ಬಂದೀವ್ರೀ".
"ಜಯನಗರ?" ಸ್ವಲ್ಪ ಗಲಿಬಿಲಿಗೊಂಡ ಅವರು, "ನಮ್ಮ್ ಮನಿ ಇರೂದು ಬಂಗಾರಪೇಟೆ ಕುವೆಂಪುನಗರನಾಗ ರೀ". ಅಂತ ವಿವರಿಸಿದರು.
"ಒಂದ್ ನಿಮಿಶ ರೀ", ಎಂದು ಸಿದ್ದು ಮಾತನಾಡುವುದು ನಿಲ್ಲಿಸಿ ನಮ್ಮ ಕಡೆ ನೋಡುತ್ತ, "ಬಂಗಾರಪೇಟ ಎಲ್ಲಿ ಬರತ್ತ ಲೇ?"
ಶಿವು, "ಬಂಗಾರಪೇಟ ಯಾಕ?" ಅಂತ ಕೇಳಿದ. ಎನೋ ಯಡವಟ್ಟಾಗಿದೆ ಅಂತ ಅವನಿಗೆ ಗೊತ್ತಾಯಿತು.
"ಇವ್ರೇನೋ ಬಂಗಾರಪೇಟ ಅನ್ನಾsತಾರ". ಸಿದ್ದು ಅಂದ.
"phone ತಾ ಇಲ್ಲೆ" ಅಂತ ಶಿವು ಪೋನು ಇಸಗೊಂಡು ಅವರೊಡನೆ ಮಾತನಾಡಿದ.
ಅವರ ಒಕ್ಕಣೆ ಪೂರ್ತಿ ಕೇಳಿ ತಿಳಿದುಕೊಂಡ. ಆಗ ಗೊತ್ತಾಗಿದ್ದು, ಹುಡುಗಿಯ ಮನೆ ಇರುವುದು ಬೆಂಗಳೂರಿನಿಂದ ಸುಮಾರು ಎಂಬತ್ತು ಕಿಲೋ ಮೀಟರ್ ದೂರದಲ್ಲಿರುವ ಬಂಗಾರಪೇಟೆಯ ಕುವೆಂಪು ನಗರದಲ್ಲಿ ಎಂದು. ಪೋನಿನ ಕರೆ ಮುಗಿಯುತ್ತಿದ್ದಂತೆಯೇ ಶಿವುನ ಸಿಟ್ಟು ಏರಿ, ಸಿದ್ದುಗೆ ಬಯ್ದಿದ್ದೇ ಬಯ್ದಿದ್ದು.
"ಒಂದ ಕೆಲಸಾ ಸರಿ ಮಾಡಾಂಗಿಲ್ಲ ನೋಡಲೇ ನೀ. ಸರಿಯಾಗಿ ಕೇಳ್ಕೊಳಾಕ್ ಬರಾಂಗಿಲ್ಲಾ? ನಮ್ sunday ಹಾಳ್ ಮಾಡಿದಿ. ನಾ ಅರಾಮ್ ಮಕ್ಕೊತಿದ್ದ್ಯಾ".
ನಾನು ಶಿವುನ ಸಮಾದಾನ ಪಡಿಸಿ, ನನಗೆ ಬಂದಿದ್ದ ಸಿಟ್ಟನ್ನೂ ಸಿದ್ದು ಮೇಲೆ ಬಯ್ದು ತೀರಿಸಿಕೊಂಡೆ.
ಗೋಪಿಗೆ ಮಾತ್ರ ಯಾಕೋ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಬರಲು ತಯಾರಾದನು.
ಬಾಡಿಗೆಯ ಗಾಡಿಯೂ ಬಂತು. ಬಿಳಿಯ ಬಣ್ಣದ Toyota Qualis.
ಅದನ್ನು ನೋಡಿ ಗೋಪಿ, "ಗಾಡಿ ಬಣ್ಣ ಸರಿಯಿಲ್ಲ. ನಮಗ black color ಬೇಕು. ನಾ ಬರಾಂಗಿಲ್ಲ" ಅನ್ನಬೇಕೆ?
ಅವನ ಮಾತಿಗೆ ನಾವೆಲ್ಲ ಬಿದ್ದು ಬಿದ್ದು ನಗುತ್ತಾ ಗಾಡಿ ಹತ್ತಿದೆವು. ಸಂಜೆಯ ಹೊತ್ತಿಗೆ ಬಂಗಾರಪೇಟೆ ತಲುಪಿ, ಹುಡುಗಿಯನ್ನು ನೋಡಿಕೊಂಡು, ಕೋಟಿ ಲಿಂಗದ ದರ್ಶನವನ್ನೂ ಪಡೆದು ಮರಳಿ ಬಂದೆವು.