ಈ ಸಂಗತಿ ನಡೆದದ್ದು ನಾವು ಆಗ ತಾನೆ ಬಿಜಾಪುರಿನಲ್ಲಿ ಇಂಜಿನಿಯರಿಂಗ್ ಓದಲು ಸೇರಿಕೊಂಡಾಗ. ನಮ್ಮ ಗೆಳೆಯ ಚಿಲ್ಲಿ, ಮ್ಯಾನೆಜ್ಮೆಂಟ್ ಪಾಲಿನಲ್ಲಿ ಜಾಗ ಪಡೆದುಕೊಂದಿದ್ದ. ಮೊದಲನೆ ಸೆಮಿಸ್ಟರ್ ಮೊದಲಾಗಿ ಕೆಲವು ದಿನಗಳು ಕಳೆದಿದ್ದವು. ಒಂದು ದಿನ, ಕಾಲೇಜಿನ ಹುಡುಗರ ವಸತಿ ಮನೆಯಲ್ಲಿ, ಚಿಲ್ಲಿ ನಮಗೆ ತಾನು ಕಾಲೇಜಿಗೆ ಸೇರಿಕೊಂಡ ಬಗೆ ಹೇಳಿದ.
ಚಿಲ್ಲಿ ಹುಟ್ಟಿ ಬೆಳೆದದ್ದು ಇಂಡಿ ತಾಲೂಕಿನ ಒಂದು ಹಳ್ಳಿಯಲ್ಲಿ. ಅವನು ಓದಿದ್ದು ಇಂಡಿಯಲ್ಲಿದ್ದ ಒಂದು ಕಲಿಕೆಮನೆ (ಶಾಲೆ) ಯಲ್ಲಿ. ನಮ್ಮ ಬಳಗದ ಇನ್ನೊಬ್ಬ ಗೆಳೆಯ ಸಿದ್ದು ಕೂಡ ಅದೇ ಕಲಿಕೆಮನೆಯಲ್ಲಿ ಓದಿದ್ದು. ಹಾಗಾಗಿ ಇಬ್ಬರೂ ಕೂಸುತನದ ಗೆಳೆಯರು. ಹತ್ತನೇ ಇಯತ್ತೆ ಮುಗಿಸಿ ಸಿದ್ದು ಬಿಜಾಪುರಿನ ಪಿಡಿಜೆ ಕಲಿಕೆಮನೆಗೆ ಸೇರಿಕೊಂಡರೆ, ಚಿಲ್ಲಿ ಬಿಜಾಪುರಿನ ಸರ್ಕಾರಿ ಪಿಯುಸಿ ಕಲಿಕೆಮನೆಗೆ ಸೇರಿಕೊಂಡ. ಬೇರೆ ಬೇರೆ ಕಡೆ ಓದಲು ಸೇರಿಕೊಂಡ ಮೇಲೆ ಇವರು ಒಬ್ಬರನ್ನೊಬ್ಬರು ಕಾಣಲು ಅವಕಾಶವೇ ಸಿಗಲಿಲ್ಲ. ಪಿಯುಸಿ ಮುಗಿದು ಪರೀಕ್ಶೆಯ ಪರಿಣಾಮ ಬಂದ ಮೇಲೆ ಸಿದ್ದು ಬಿಜಾಪುರಿನ SECAB ಕಾಲೇಜಿನ ಮ್ಯಾನೆಜ್ಮೆಂಟ್ ಪಾಲಿನಲ್ಲಿ ಇಂಜಿನಿಯರಿಂಗ್ ಸೇರಿಕೊಂಡ. ಚಿಲ್ಲಿಗೆ ಇದ್ದದ್ದು ಚಿಕ್ಕ ಕನಸು. ತಾನು ಟಿಸಿಎಚ್ ಕಲಿತು, ಕನ್ನಡ ಕಲಿಕೆಮನೆಯ ಮಾಸ್ತರ್ ಆಗಬೇಕೆಂದು. ಆದರೆ ಅವನ ಹಣೆಬರಹವೇ ಬೇರೆ ಇತ್ತು.
ಚಿಲ್ಲಿಯ ಬದುಕಿನ ದಿಕ್ಕು ಬದಲಿಸಿದ ಆ ದಿನ ಅವನು ಟಿಸಿಎಚ್ ಕಾಲೇಜಿಗೆ ಸೇರಿಕೊಳ್ಳಲು ಇರುವ ಗಡುವನ್ನು ನೋಡಿಕೊಂಡು ತಿರುಗಿ ಬರುತ್ತಿದ್ದ. ಪಿಡಿಜೆ ಕಾಲೇಜಿನ ಹತ್ತಿರ ಅವನಿಗೆ ಎದುರಾಗಿದ್ದು ಸಿದ್ದು. ಅವರಿಬ್ಬರ ನಡುವೆ ನಡೆದ ಮಾತುಕತೆ ಹೀಗಿದೆ. ಎರಡು ವರ್ಶದಿಂದ ಪರಿಚಯ ಬಿದ್ದುಹೋಗಿದ್ದರಿಂದ ಒಬ್ಬರನ್ನೊಬ್ಬರು ಬಹುವಚನದಲ್ಲೇ ಮಾತನಾಡಿಸಿದರು.
"ಏನ್ರೀ ಸಿದ್ದು, ಹೆಂಗದೀರಿ?"
"ಆರಾಮ್ ರೀ ಚಿಲ್ಲಿ. ನೀವು?"
"ನಾವೂ ಆರಾಮ್. ಏನ್ ಮಾಡಾತೀರಿ ಈಗ?"
"ನಾ SECAB ಕಾಲೇಜನಾಗ ಇಂಜಿನಿಯರಿಂಗ್ ಸೇರಿನಿ. ನೀವು?"
"ನಾ ಟಿಸಿಎಚ್ ಮಾಡಬೇಕಂತ ಮಾಡೀನ್ರಿ. ಈಗ last date ನೋಡಕೊಂಡ ಬಂದೆ."
"ಹೌದ್ರಿ. ಚಲೋ ಆತು. ಮತ್ತ?"
"Fees ಎಶ್ಟರಿ ಇಂಜಿನಿಯರಿಂಗ್ seatಗ?"
"ನಂದು E&C, ಮ್ಯಾನೆಜ್ಮೆಂಟ seat. ಸ್ವಲ್ಪ ಹೆಚ್ಚದsರಿ".
"ಓ ಹೌದ್ರಿ. ಮತ್ತ?"
"ಮತ್ತೇನಿಲ್ರಿ. ಆಯ್ತು ನಡೀಲ್ರಿ."
"ಆಯ್ತರಿ. ಮತ್ತ ಬೆಟ್ಟಿ ಆಗುನು." ಇಬ್ಬರೂ ಬೇರೆಯಾದರು.
ಹಳ್ಳಿಯ ವಾತಾವರಣದಲ್ಲಿ ಬೆಳೆದ ಚಿಲ್ಲಿಯ ಮನಸ್ಸಿನಲ್ಲಿ ಇಂಜಿನಿಯರಿಂಗ್ ಓದುವ ವಿಚಾರ ಯಾವತ್ತಿಗೂ ಸುಳಿದಿರಲಿಲ್ಲ. ಅವನ ಮುಂದಿನ ಓದಿಗೆ ದಾರಿತೋರಿಸುವವರು ಯಾರೂ ಇರಲಿಲ್ಲ. ಟಿಸಿಎಚ್ ಮುಗಿಸಿ ಸರ್ಕಾರಿ ಕಲಿಕೆಮನೆಯಲ್ಲಿ ಮಾಸ್ತರ್ ಆದರೆ ಸಾಕಿತ್ತು. ಆ ದಿನ ಸಂಜೆ ಮನೆಗೆ ಹೋಗಿ, ತನ್ನ ತಂದೆಯ ಮುಂದೆ, ಸಿದ್ದು ಸಿಕ್ಕಿದ್ದು, ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡದ್ದು, ಎಲ್ಲವನ್ನೂ ಹೇಳಿದನು. ಬಹುಶ್ಹ ಚಿಲ್ಲಿಗೆ ಇಂಜಿನಿಯರಿಂಗ್ ಮಾಡುವ ಮನಸ್ಸಿರಬಹುದೆಂದು ತಿಳಿದು, ಮಾರನೇ ದಿನವೇ ಚಿಲ್ಲಿಯ ತಂದೆ ಇಂಜಿನಿಯರಿಂಗಗೆ ಸೇರಿಕೊಳ್ಳಲು ಬೇಕಾಗುವಷ್ಟು ಹಣವನ್ನು ತೆಗೆದುಕೊಂಡು, ಬಿಜಾಪುರಿಗೆ ಬಂದು SECAB ಕಾಲೇಜಿನಲ್ಲಿ ಸೇರಿಸಿಯೇಬಿಟ್ಟರು. ಅಶ್ಟೇನು ಕಲಿತವರಲ್ಲದ ಚಿಲ್ಲಿಯ ತಂದೆ, ಒಂದೆ ದಿನದಲ್ಲಿ ಚಿಲ್ಲಿಯನ್ನು ಇಂಜಿನಿಯರಿಂಗ್ ಸೇರಿಸಲು ನಿರ್ದರಿಸಿದ್ದು ಆಶ್ಚರ್ಯವೇ ಸರಿ.
ಹೀಗೆ ಚಿಲ್ಲಿ SECABನ ಹುಡುಗರ ವಸತಿಮನೆಯಲ್ಲಿ ತನ್ನ ಕತೆ ಹೇಳಿಕೊಂಡ. ಆಗ ಯಾರೋ ಅವನಿಗೆ ಕೇಳಿದರು
"ನಿನ್ CET ranking ಎಶ್ಟ್ ಬಂದಿತ್ತು?"
"CET rankingಗಾ? ಹಂಗಂದ್ರ?" ಸರ್ಕಾರಿ ಕಲಿಕೆಮನೆಯಲ್ಲಿ, ಬಹುತೇಕ ಹಳ್ಳಿ ಹುಡುಗರ ನಡುವೆ ಕಲಿತ ಚಿಲ್ಲಿಗೆ CET ಅಂದರೇನೆಂದು ಕೂಡ ಗೊತ್ತಿರಲಿಲ್ಲ.
ಇನ್ಯಾರೊ ಅಂದರು: "ನೀ exam ಬರ್ದೀ ಇಲ್ಲೊ? ಒಂದು question ಇರ್ತದ, ನಾಕ್ option ಇರ್ತಾವ"
"ಓಹ್... ಅದೂರೀ... ನಾಕ್ ರಾಗ್ ಒಂದು ಟಿಕ್ ಹಾಕುದು. ಹೂಂ ಬರ್ದಿನಿ."
"ಮತ್ತ ranking ನೋಡಿಲ್ಲಾ?"
"ಇಲ್ಲರಿ"
ಚಿಲ್ಲಿಯ ಮಾತಿಗೆ, ಸುತ್ತ ಕುಳಿತವರೆಲ್ಲ ನಕ್ಕು ನಕ್ಕು ಸುಸ್ತಾದರು. ಅಲ್ಲಿದ್ದ ಕೆಲವರು ಅವನ CET ನೊಂದಣಿ ಅಂಕಿಯನ್ನು ಹುಡುಕಿ, ranking ನೋಡಿದಾಗ ಗೊತ್ತಾಯಿತು ಅವನಿಗೆ ಕಡಿಮೆ ರುಸುಮಿನಲ್ಲಿ (ಫೀಜು) ಸೇರಬಹುದಾಗಿತ್ತು ಎಂದು. ತಡಮಾಡದೆ, ಇನ್ನೂ ನಡೆಯುತ್ತಿದ್ದ CET ಕೌನ್ಸೆಲ್ಲಿಂಗ್ ಹೋಗಿ ಸರ್ಕಾರಿ ಸೀಟು ತೆಗೆದುಕೊಂಡು ಬಂದ. ಕಡಿಮೆ ಕರ್ಚಿನಲ್ಲಿ ಇಂಜಿನಿಯರಿಂಗ್ ಮುಗಿಸಿದ. ಮಾಸ್ತರ್ ಆಗಬೇಕಿದ್ದವನು ಇಂಜಿನಿಯರ್ ಆಗಿ ಜರ್ಮನಿಯಂತ ನಾಡು ಸುತ್ತಿ ಬಂದಿರುವ ಚಿಲ್ಲಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.
ಚಿಲ್ಲಿ ಹುಟ್ಟಿ ಬೆಳೆದದ್ದು ಇಂಡಿ ತಾಲೂಕಿನ ಒಂದು ಹಳ್ಳಿಯಲ್ಲಿ. ಅವನು ಓದಿದ್ದು ಇಂಡಿಯಲ್ಲಿದ್ದ ಒಂದು ಕಲಿಕೆಮನೆ (ಶಾಲೆ) ಯಲ್ಲಿ. ನಮ್ಮ ಬಳಗದ ಇನ್ನೊಬ್ಬ ಗೆಳೆಯ ಸಿದ್ದು ಕೂಡ ಅದೇ ಕಲಿಕೆಮನೆಯಲ್ಲಿ ಓದಿದ್ದು. ಹಾಗಾಗಿ ಇಬ್ಬರೂ ಕೂಸುತನದ ಗೆಳೆಯರು. ಹತ್ತನೇ ಇಯತ್ತೆ ಮುಗಿಸಿ ಸಿದ್ದು ಬಿಜಾಪುರಿನ ಪಿಡಿಜೆ ಕಲಿಕೆಮನೆಗೆ ಸೇರಿಕೊಂಡರೆ, ಚಿಲ್ಲಿ ಬಿಜಾಪುರಿನ ಸರ್ಕಾರಿ ಪಿಯುಸಿ ಕಲಿಕೆಮನೆಗೆ ಸೇರಿಕೊಂಡ. ಬೇರೆ ಬೇರೆ ಕಡೆ ಓದಲು ಸೇರಿಕೊಂಡ ಮೇಲೆ ಇವರು ಒಬ್ಬರನ್ನೊಬ್ಬರು ಕಾಣಲು ಅವಕಾಶವೇ ಸಿಗಲಿಲ್ಲ. ಪಿಯುಸಿ ಮುಗಿದು ಪರೀಕ್ಶೆಯ ಪರಿಣಾಮ ಬಂದ ಮೇಲೆ ಸಿದ್ದು ಬಿಜಾಪುರಿನ SECAB ಕಾಲೇಜಿನ ಮ್ಯಾನೆಜ್ಮೆಂಟ್ ಪಾಲಿನಲ್ಲಿ ಇಂಜಿನಿಯರಿಂಗ್ ಸೇರಿಕೊಂಡ. ಚಿಲ್ಲಿಗೆ ಇದ್ದದ್ದು ಚಿಕ್ಕ ಕನಸು. ತಾನು ಟಿಸಿಎಚ್ ಕಲಿತು, ಕನ್ನಡ ಕಲಿಕೆಮನೆಯ ಮಾಸ್ತರ್ ಆಗಬೇಕೆಂದು. ಆದರೆ ಅವನ ಹಣೆಬರಹವೇ ಬೇರೆ ಇತ್ತು.
ಚಿಲ್ಲಿಯ ಬದುಕಿನ ದಿಕ್ಕು ಬದಲಿಸಿದ ಆ ದಿನ ಅವನು ಟಿಸಿಎಚ್ ಕಾಲೇಜಿಗೆ ಸೇರಿಕೊಳ್ಳಲು ಇರುವ ಗಡುವನ್ನು ನೋಡಿಕೊಂಡು ತಿರುಗಿ ಬರುತ್ತಿದ್ದ. ಪಿಡಿಜೆ ಕಾಲೇಜಿನ ಹತ್ತಿರ ಅವನಿಗೆ ಎದುರಾಗಿದ್ದು ಸಿದ್ದು. ಅವರಿಬ್ಬರ ನಡುವೆ ನಡೆದ ಮಾತುಕತೆ ಹೀಗಿದೆ. ಎರಡು ವರ್ಶದಿಂದ ಪರಿಚಯ ಬಿದ್ದುಹೋಗಿದ್ದರಿಂದ ಒಬ್ಬರನ್ನೊಬ್ಬರು ಬಹುವಚನದಲ್ಲೇ ಮಾತನಾಡಿಸಿದರು.
"ಏನ್ರೀ ಸಿದ್ದು, ಹೆಂಗದೀರಿ?"
"ಆರಾಮ್ ರೀ ಚಿಲ್ಲಿ. ನೀವು?"
"ನಾವೂ ಆರಾಮ್. ಏನ್ ಮಾಡಾತೀರಿ ಈಗ?"
"ನಾ SECAB ಕಾಲೇಜನಾಗ ಇಂಜಿನಿಯರಿಂಗ್ ಸೇರಿನಿ. ನೀವು?"
"ನಾ ಟಿಸಿಎಚ್ ಮಾಡಬೇಕಂತ ಮಾಡೀನ್ರಿ. ಈಗ last date ನೋಡಕೊಂಡ ಬಂದೆ."
"ಹೌದ್ರಿ. ಚಲೋ ಆತು. ಮತ್ತ?"
"Fees ಎಶ್ಟರಿ ಇಂಜಿನಿಯರಿಂಗ್ seatಗ?"
"ನಂದು E&C, ಮ್ಯಾನೆಜ್ಮೆಂಟ seat. ಸ್ವಲ್ಪ ಹೆಚ್ಚದsರಿ".
"ಓ ಹೌದ್ರಿ. ಮತ್ತ?"
"ಮತ್ತೇನಿಲ್ರಿ. ಆಯ್ತು ನಡೀಲ್ರಿ."
"ಆಯ್ತರಿ. ಮತ್ತ ಬೆಟ್ಟಿ ಆಗುನು." ಇಬ್ಬರೂ ಬೇರೆಯಾದರು.
"CET rankingಗಾ? ಹಂಗಂದ್ರ?" ಸರ್ಕಾರಿ ಕಲಿಕೆಮನೆಯಲ್ಲಿ, ಬಹುತೇಕ ಹಳ್ಳಿ ಹುಡುಗರ ನಡುವೆ ಕಲಿತ ಚಿಲ್ಲಿಗೆ CET ಅಂದರೇನೆಂದು ಕೂಡ ಗೊತ್ತಿರಲಿಲ್ಲ.
ಇನ್ಯಾರೊ ಅಂದರು: "ನೀ exam ಬರ್ದೀ ಇಲ್ಲೊ? ಒಂದು question ಇರ್ತದ, ನಾಕ್ option ಇರ್ತಾವ"
"ಓಹ್... ಅದೂರೀ... ನಾಕ್ ರಾಗ್ ಒಂದು ಟಿಕ್ ಹಾಕುದು. ಹೂಂ ಬರ್ದಿನಿ."
"ಮತ್ತ ranking ನೋಡಿಲ್ಲಾ?"
"ಇಲ್ಲರಿ"
ಚಿಲ್ಲಿಯ ಮಾತಿಗೆ, ಸುತ್ತ ಕುಳಿತವರೆಲ್ಲ ನಕ್ಕು ನಕ್ಕು ಸುಸ್ತಾದರು. ಅಲ್ಲಿದ್ದ ಕೆಲವರು ಅವನ CET ನೊಂದಣಿ ಅಂಕಿಯನ್ನು ಹುಡುಕಿ, ranking ನೋಡಿದಾಗ ಗೊತ್ತಾಯಿತು ಅವನಿಗೆ ಕಡಿಮೆ ರುಸುಮಿನಲ್ಲಿ (ಫೀಜು) ಸೇರಬಹುದಾಗಿತ್ತು ಎಂದು. ತಡಮಾಡದೆ, ಇನ್ನೂ ನಡೆಯುತ್ತಿದ್ದ CET ಕೌನ್ಸೆಲ್ಲಿಂಗ್ ಹೋಗಿ ಸರ್ಕಾರಿ ಸೀಟು ತೆಗೆದುಕೊಂಡು ಬಂದ. ಕಡಿಮೆ ಕರ್ಚಿನಲ್ಲಿ ಇಂಜಿನಿಯರಿಂಗ್ ಮುಗಿಸಿದ. ಮಾಸ್ತರ್ ಆಗಬೇಕಿದ್ದವನು ಇಂಜಿನಿಯರ್ ಆಗಿ ಜರ್ಮನಿಯಂತ ನಾಡು ಸುತ್ತಿ ಬಂದಿರುವ ಚಿಲ್ಲಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ.

Nice to know Chilli's story... :)
ReplyDeleteVery well written, good to see namma north karnataka language.. Hoping to see more of such blogs...
Actually even today, many village students especially from north Karnataka villages who are quite intelligent, can't achieve their goals because of lack of motivation, financial support, proper guidance and knowledge on how to choose their career and achieve it successfully.
Very few fortunate enough like Chilli will get parent's support and could become successfull.
It would be good if we could help at least few village students with proper guidance and motivation(atleast in and around our own native places).
Am not sure if you people already doing something about it, but if we all can just share our own experience with our village school students (specially 10th class), it will also make a big impact.
We have conducted few such events(Junior Achievement - Career with a Purpose session) and found that though the students are so intelligent, but poor in English, even 10th std students can't spell their names correctly. They have their goals set, of becoming Doctors, Engineers, Teachers, etc.. but don't know what to select after 10th std, how much should be the ranking, which colleges to select, how much would be the fees.
Please let me know if any of you are interested in conducting such events in your villages, can share few inputs from the sessions we already conducted and which seems to have impacted.
Let us all try to give something back to the society and make a difference.
Thanks,
Prajakta
Hey Chilli, nice one dude.. I didn't know this !!!! Good keep it up.... :)
ReplyDelete